Lokayukta Raid: ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಲೇಡಿ ಆಫೀಸರ್!
Here's what's trending across India right now:
ಗದಗ (ಜು.24): ಗ ದಗ ಜಿಲ್ಲೆಯಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದು, ಹೊರಗುತ್ತಿಗೆ ಆಧಾರದ (Outsourcing) ಉದ್ಯೋಗಕ್ಕಾಗಿ ಲಂಚ ಪಡೆಯುತ್ತಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯನ್ನು (District Child Protection Officer - DCPO) ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ಬಲೆಗೆ ಬಿದ್ದ ಲೇಡಿ ಆಫೀಸರ್ ಅನ್ನು ರಫಿಕಾ ಹಳ್ಳೂರು (Rafika Hallur) ಎಂದು ಗುರುತಿಸಲಾಗಿದೆ.
Adding to this, ಬಾಲಮಂದಿರದಲ್ಲಿ ಖಾಲಿಯಿದ್ದ ಕಂಪ್ಯೂಟರ್ ಆಪರೇಟರ್ (Computer Operator) ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಳ್ಳಲು ಯುವಕನೊಬ್ಬ ಅರ್ಜಿ ಸಲ್ಲಿಸಿದ್ದನು. ಈ ಹುದ್ದೆಯನ್ನು ಕೊಡಿಸಲು ಮಕ್ಕಳ ರಕ್ಷಣಾಧಿಕಾರಿ ರಫಿಕಾ ಹಳ್ಳೂರು ಆತನ ಬಳಿ ₹30,000 ಲಂಚದ (Bribe) ಬೇಡಿಕೆ ಇಟ್ಟಿದ್ದರು. ಸುದೀರ್ಘ ಮಾತುಕತೆಯ ನಂತರ ಕೊನೆಗೆ ₹15,000 ಹಣ ನೀಡಲು ಡೀಲ್ (Deal) ಕುದುರಿಸಲಾಗಿತ್ತು. ಲಂಚ ನೀಡಲು ಇಷ್ಟವಿಲ್ಲದ ಅಭ್ಯರ್ಥಿ ಈ ಬಗ್ಗೆ ತಕ್ಷಣವೇ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
Meanwhile, ಮಹಿಳಾ ಮತ್ತು ಮಕ್ಕಳ ತಾಲೂಕು ಕಚೇರಿಯಲ್ಲಿ (Tehsildar / Taluk Office) ಅಧಿಕಾರಿಯ ಸೂಚನೆಯಂತೆ ಅವರ ಚಾಲಕ (Driver) ಮೌಲಾನಾ ಅಭ್ಯರ್ಥಿಯಿಂದ ₹15,000 ಹಣವನ್ನು ಸ್ವೀಕರಿಸುತ್ತಿದ್ದನು. ಈ ವೇಳೆ ತಕ್ಷಣವೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು (Lokayukta Police) ಚಾಲಕ ಮೌಲಾನಾನನ್ನು ಹಣ ಸಮೇತ ವಶಕ್ಕೆ ಪಡೆದು, ಲಂಚಕ್ಕೆ ಸೂಚನೆ ನೀಡಿದ್ದ ಅಧಿಕಾರಿ ರಫಿಕಾ ಹಳ್ಳೂರು ಅವರನ್ನೂ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಪ್ರಸ್ತುತ ಲೋಕಾಯುಕ್ತ ಅಧಿಕಾರಿಗಳ ತಂಡವು ಮಕ್ಕಳ ರಕ್ಷಣಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿಯಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ (Verification) ನಡೆಸುತ್ತಿದೆ.
Notably, ಈ ಭಾರಿ ಲೋಕಾಯುಕ್ತ ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್ಪಿ (SP) ಟಿ. ಸಿದ್ಧಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ (DySP) ಲೋಕೇಶ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಈ ದಾಳಿ ತಂಡದಲ್ಲಿ ಇನ್ಸ್ಪೆಕ್ಟರ್ಗಳಾದ (Inspectors) ಪರಮೇಶ್ವರ ಕವಟಗಿ, ಎಸ್.ಎಸ್. ತೇಲಿ ಹಾಗೂ ಸಿಬ್ಬಂದಿಗಳಾದ ಮಂಜುನಾಥ್ ಗಾರ್ಗಿ, ತನುಜಾ ಜವಳಿ, ನೀಲಕಂಠ ಅಂಬಿಗೇರ್, ಹಸನ್ ದೇಪುರವಾಲಾ, ಉಮೇಶ್ ಸಂಗನಾಳ, ಮಂಜುನಾಥ್ ದಿಡಗೂರ, ಪ್ರಸಾದ್ ಪೀರಮಾಳ್, ಸಂಕಪ್ಪ ನೈನಾಪುರ, ಮೃತ್ಯುಂಜಯ ಹಿರೇಮಠ ಮತ್ತು ಇರ್ಫಾನ್ ಸೈಫಣ್ಣವರ್ ಉಪಸ್ಥಿತರಿದ್ದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
Source: Asianet News Kannada